ಮಂಗಳೂರಿನ ವಿಮಾನ ದುರಂತ ........ಎನಿಸಿದರೆ ಸಾಕು......
ಏನಾಗಿ ಹೋಯಿತು..ಒ೦ದೇ ಒಂದು ನಿಮಿಷದಲ್ಲಿ.. ಅಷ್ಟೊಂದು ಸಂತಸದಲ್ಲಿ ಇದ್ದ ಜೀವಗಳು ..ಇನ್ನೇನು ನಾವು ಭೂಮಿ ತಾಯಿಯ ಸ್ಪರ್ಶ
ಮಾಡಲಿದ್ದೇವೆ ಎಂದು ಅನಿಸುವಷ್ಟರಲ್ಲಿ ................
ತಂದೆ ತಾಯಿಗಳ ತೆಕ್ಕೆಯಲಿ ಸೇರಬೇಕೆಂದು ಬಂದಿರುವ ಮಕ್ಕಳು, ಪ್ರಿಯತಮೆಯ ತೋಳಿನಲ್ಲಿ ಕರಗ ಬೇಕೆಂದು ಆಸೆಯಿ೦ದ
ಬಂದಿರುವ ,,,ಇನ್ನು ಕೆಲವರು, .. ರಜ ದಿನಗಳನ್ನು ಆರಾಮಾಗಿ ದೂರದ ಊರಿನಲ್ಲಿ ಕಳೆದು ತಾಯ್ನಾಡಿಗೆ ಕುಶಿಯಿಂದ ಹಿಂದಿರುಗುತ್ತಿರುವ
ಹಲವರು...ಹೀಗೆ ನಾನಾ ರೀತಿಯಲ್ಲಿ... ಅವರು ಮನದಾಳದಲ್ಲಿ ತು೦ಬಿಕೊ೦ಡು ಬಂದಿರುವ ಆಸೆ ಗಳು, ಆತ್ಮೀಯರಲ್ಲಿ ಹ೦ಚಿ ಕೊಳ್ಳಲು
ಬಾಕಿ ಇಟ್ಟಂಥ ಭಾವನೆಗಳು. ತ0ದಿರುವ೦ಥ ಉಡುಗೊರೆಗಳು,,, ಎಲ್ಲವೂ ,,,,ಬೆಂಕಿಯಲ್ಲಿ ಉರಿದು ,,,,,ಹೋದವು. ಒಂದೇ ಒಂದು
ನಿಮಿಷದ ಅ0ತರದಲ್ಲಿ..ಅವರನ್ನ ಪ್ರೀತಿಯಿಂದ ಬರ ಮಾಡಿಕೊಳ್ಳಲು ಹೋದ ಅವರ ಮನೆಯವರ ಮುಂದೆಯೇ..ನೋಡು
ನೋಡುತ್ತಿದ್ದ ..ಒಹ್..............
ದೇವರು ಒಮ್ಮೊಮ್ಮೆ ಎಷ್ಟು ಕ್ರೂರಿ ಅನಿಸುತ್ತೆ ಅಲ್ವ..... ಈ ತರ ಎಲ್ಲ ಆದಾಗ...... ಈ ಸಾವು, ನೋವು ,,,ಆಕ್ರಂದನ ...ರೋದನ ,,,,
ಎಲ್ಲ ನೋಡುವಾಗ,,,,
ನಮ್ಮ ಪರಿಚಯದ ಫ್ಯಾಮಿಲಿ ಒಂದು ಅದರಲ್ಲಿ ಇತ್ತು :
ಆದ್ರೆ ನನಗೆ ಗೊತ್ತಾಗಿದ್ದು ಸಂಡೇ ,,,ಪೇಪರ್ ನೋಡಿದಾಗ,,, ತಾಯಿ, ಮಗಳು ಮತ್ತೆ ಮಗ....
ನನ್ನ ಮಗನ ಶಾಲೆಯಲ್ಲಿ ಆ ಮಗಳು ಮತ್ತೆ ಮಗನನ್ನ ದಿನ ನೋಡುತ್ತಿದ್ದೆ..ಆ ಮಗಳು 10th ಕ್ಲಾಸಿನಲ್ಲಿ.. ... ಆ ಹುಡುಗ 3rd ನಲ್ಲಿ ಇದ್ದ..... ಒಂದು ಕ್ಷಣಕ್ಕೆ ನನಗೆ ,,,,, ಪೇಪರ್ ನೋಡಿದಾಗ ಏನು ಅರ್ಥಾನೆ ಆಗ್ಲಿಲ್ಲ.......ಆಮೇಲೆ ಶಾಲೆ ಒಬ್ಬ ಪೇರೆಂಟ್ಸ್ ಗೆ ಕಾಲ್ ಮಾಡಿ ಕೇಳಿದೆ... ಆವಾಗ ಗೊತ್ತಾಯ್ತು... ವಿಷಯ,,, ಶಾಲೆ ಮುಗಿಸಿ ರಜೆ ದಿನಗಳನ್ನ ಅವರ ತಂದೆ ಜೊತೆ ಕಳೆಯಲು ಅಮ್ಮ ,ಮಗಳು ಮತ್ತು ಮಗ ಜೊತೆಯಾಗಿ .. ದುಬೈಗೆ ಹೋಗಿದ್ರು.. .. ವಾಪಸ್ ಬರ್ಬೇಕಿದ್ರೆ ,,, ಅದೇ ವಿಮಾನದಲ್ಲಿ ಅವರಿದ್ರು......
ಶನಿವಾರ ದಿನ ನೆಟ್ನಲ್ಲಿ ಅ ದೇ ನ್ಯೂಸ್ ನೋಡಿ ನೋಡಿ ಒಂಥರ ವೈರಾಗ್ಯ ಬಂದು ಬಿಟ್ಟಿತ್ತು... ಜೀವನ ಎಂದರೆ ನೀರ ಮೇಲಿನ ಗುಳ್ಳೆ
ಅಂತ ಮನಸು ಒಪ್ಪಿಕೊಂಡು ಬಿಟ್ಟಿತ್ತು,,
ನಮ್ಮ ಪ್ರಾರ್ಥನೆ ಇಷ್ಟೇ... ಅಗಲಿದ ಆ ಅತೃಪ್ತ ಆತ್ಮಗಳಿಗೆ.... ಹೃದಯ ಪೂರ್ವಕ ಶ್ರದಾಂಜಲಿ..
"MAY YOUR SOUL REST IN PEACE"