ಮನಸಿದು ಹಕ್ಕಿಯ ಗೂಡು ಅದರೊಳಗಡೆ ಏನಿದೆ ನೋಡು..


ನಿಮಗೆ ಹೇಗೆ ಅನಿಸಿತು.... ಹೇಳ್ತೀರಾ ...

Search This Blog

Powered By Blogger

Friday, June 25, 2010

ಅವರವರ ಭಾವಕ್ಕೆ....


 ಹೆಣ್ಣು :    ಯಾರು ....




ಕೆಲವರಿಗೆ  ಮಮತಾಮಯಿ 
ಅವಳು ಮುದ್ದಿನ ತಾಯಿ

 ಹಲವರಿಗೆ ಸೋದರಿ ..ಸಹೋದರಿ 
ಪ್ರೀತಿ ತುಂಬಿದ  ಬಾಂಧವ್ಯದ ಲಹರಿ

ಬಾಳ ಸಂಗಾತಿಯ ಸಂಪೂರ್ಣ ಪ್ರೀತಿ
ವಿವಾಹದ ನಂತರ ಸಿಗುವ ಅ ರೀತಿ..

ಆದ್ರೆ  ಕಾಮ ತುಂಬಿದ ಕಣ್ಣುಗಳಿಗೆ...
ಕಾಣುವುದು  ಕೇವಲ ಹೆಣ್ಣು,,,,,ಹೆಣ್ಣು  ..ಹೆಣ್ಣು.......ಅಷ್ಟೇ..

ತಾಯಿ ..ತಂಗಿ ..ಅಕ್ಕ...ಹೆ೦ದತಿ
ಮಗಳು  ಯಾವುದು ನೆನಪಿರಲ್ಲ.....

Tuesday, June 15, 2010

ನನ್ನ ಆಸೆ ,,,...................?



ನನ್ನ ಜಗತ್ತು ಹೀಗಿರಬೇಕು...
 ನನ್ನವರೆಲ್ಲ  ಹೀಗಿರಬೇಕು..

ಎಲ್ಲ ಕಡೆ ನಗು  ತುಂಬಿರಬೇಕು
ಎಲ್ಲರು ನಗುತಿರಬೇಕು
ನಮ್ಮವರೆಲ್ಲ  ,ಮನಸು
ಕಲ್ಮಶವಿಲ್ಲದೆ ಶುಧ್ಹವಾಗಿರಬೇಕು

ತಪ್ಪು ಒಪ್ಪುಗಳ ವಿನಿಮಯ ವಾಗಬೇಕು
ದಾರಿ ತಪ್ಪಿದರೆ ಸರಿ ಪಡಿಸಬೇಕು ..
ಧ್ವೇಷ ಮರೆತು ಪ್ರೀತಿಸುವ ಹಾಗಿರಬೇಕು
ನೋವೆನ್ನೆಲ್ಲ ಹ೦ಚಿ ಕೊಳ್ಳ ಬೇಕು

ಬೇಸರವಾದರೆ ಹೇಳಿಕೊಳ್ಳಬೇಕು
ಸಿಟ್ಟು ಬ೦ದರೆ ಕಟ್ಟಿ ಕೊಳ್ಳಬೇಕು
ಪ್ರೀತಿ  ನೋವ  ಮರೆಸುವಂತಿರಬೇಕು
ಭಾವನೆಗಳಿಗೆ ಬೆಲೆ ಕೊಡಬೇಕು


Wednesday, May 26, 2010

ಕರಗಿದ ಜೀವಗಳಿಗೆ ನಮ್ಮ ಭಾವ ಪೂರ್ಣ ಶ್ರದ್ದಾಂಜಲಿ..

ಕರಗಿದ ಜೀವಗಳಿಗೆ ನಮ್ಮ ಭಾವ ಪೂರ್ಣ ಶ್ರದ್ದಾಂಜಲಿ.. 

ಮಂಗಳೂರಿನ  ವಿಮಾನ ದುರಂತ ........ಎನಿಸಿದರೆ ಸಾಕು......

ಏನಾಗಿ ಹೋಯಿತು..ಒ೦ದೇ ಒಂದು ನಿಮಿಷದಲ್ಲಿ..  ಅಷ್ಟೊಂದು ಸಂತಸದಲ್ಲಿ  ಇದ್ದ ಜೀವಗಳು ..ಇನ್ನೇನು ನಾವು ಭೂಮಿ ತಾಯಿಯ ಸ್ಪರ್ಶ

ಮಾಡಲಿದ್ದೇವೆ  ಎಂದು ಅನಿಸುವಷ್ಟರಲ್ಲಿ ................

ತಂದೆ ತಾಯಿಗಳ ತೆಕ್ಕೆಯಲಿ ಸೇರಬೇಕೆಂದು ಬಂದಿರುವ ಮಕ್ಕಳು, ಪ್ರಿಯತಮೆಯ ತೋಳಿನಲ್ಲಿ ಕರಗ ಬೇಕೆಂದು ಆಸೆಯಿ೦ದ

ಬಂದಿರುವ ,,,ಇನ್ನು ಕೆಲವರು, .. ರಜ ದಿನಗಳನ್ನು  ಆರಾಮಾಗಿ  ದೂರದ ಊರಿನಲ್ಲಿ ಕಳೆದು ತಾಯ್ನಾಡಿಗೆ ಕುಶಿಯಿಂದ ಹಿಂದಿರುಗುತ್ತಿರುವ

ಹಲವರು...ಹೀಗೆ ನಾನಾ ರೀತಿಯಲ್ಲಿ... ಅವರು ಮನದಾಳದಲ್ಲಿ  ತು೦ಬಿಕೊ೦ಡು   ಬಂದಿರುವ ಆಸೆ ಗಳು, ಆತ್ಮೀಯರಲ್ಲಿ ಹ೦ಚಿ ಕೊಳ್ಳಲು

ಬಾಕಿ ಇಟ್ಟಂಥ ಭಾವನೆಗಳು. ತ0ದಿರುವ೦ಥ  ಉಡುಗೊರೆಗಳು,,,  ಎಲ್ಲವೂ ,,,,ಬೆಂಕಿಯಲ್ಲಿ ಉರಿದು ,,,,,ಹೋದವು. ಒಂದೇ ಒಂದು

ನಿಮಿಷದ ಅ0ತರದಲ್ಲಿ..ಅವರನ್ನ ಪ್ರೀತಿಯಿಂದ  ಬರ ಮಾಡಿಕೊಳ್ಳಲು ಹೋದ ಅವರ ಮನೆಯವರ ಮುಂದೆಯೇ..ನೋಡು

ನೋಡುತ್ತಿದ್ದ  ..ಒಹ್..............

ದೇವರು ಒಮ್ಮೊಮ್ಮೆ ಎಷ್ಟು ಕ್ರೂರಿ ಅನಿಸುತ್ತೆ ಅಲ್ವ..... ಈ ತರ    ಎಲ್ಲ ಆದಾಗ......  ಈ ಸಾವು, ನೋವು ,,,ಆಕ್ರಂದನ ...ರೋದನ ,,,,

ಎಲ್ಲ ನೋಡುವಾಗ,,,,

ನಮ್ಮ ಪರಿಚಯದ ಫ್ಯಾಮಿಲಿ ಒಂದು ಅದರಲ್ಲಿ ಇತ್ತು :

ಆದ್ರೆ ನನಗೆ ಗೊತ್ತಾಗಿದ್ದು   ಸಂಡೇ ,,,ಪೇಪರ್ ನೋಡಿದಾಗ,,,  ತಾಯಿ, ಮಗಳು  ಮತ್ತೆ ಮಗ....

ನನ್ನ ಮಗನ ಶಾಲೆಯಲ್ಲಿ ಆ  ಮಗಳು ಮತ್ತೆ ಮಗನನ್ನ  ದಿನ ನೋಡುತ್ತಿದ್ದೆ..ಆ ಮಗಳು 10th  ಕ್ಲಾಸಿನಲ್ಲಿ.. ... ಆ ಹುಡುಗ   3rd  ನಲ್ಲಿ ಇದ್ದ.....  ಒಂದು ಕ್ಷಣಕ್ಕೆ ನನಗೆ ,,,,, ಪೇಪರ್ ನೋಡಿದಾಗ   ಏನು ಅರ್ಥಾನೆ   ಆಗ್ಲಿಲ್ಲ.......ಆಮೇಲೆ ಶಾಲೆ ಒಬ್ಬ ಪೇರೆಂಟ್ಸ್ ಗೆ  ಕಾಲ್ ಮಾಡಿ ಕೇಳಿದೆ... ಆವಾಗ ಗೊತ್ತಾಯ್ತು... ವಿಷಯ,,, ಶಾಲೆ ಮುಗಿಸಿ ರಜೆ ದಿನಗಳನ್ನ ಅವರ ತಂದೆ ಜೊತೆ ಕಳೆಯಲು  ಅಮ್ಮ ,ಮಗಳು ಮತ್ತು ಮಗ  ಜೊತೆಯಾಗಿ ..  ದುಬೈಗೆ ಹೋಗಿದ್ರು.. ..   ವಾಪಸ್ ಬರ್ಬೇಕಿದ್ರೆ ,,,  ಅದೇ ವಿಮಾನದಲ್ಲಿ ಅವರಿದ್ರು......


ಶನಿವಾರ ದಿನ ನೆಟ್ನಲ್ಲಿ ಅ ದೇ ನ್ಯೂಸ್ ನೋಡಿ ನೋಡಿ ಒಂಥರ ವೈರಾಗ್ಯ ಬಂದು ಬಿಟ್ಟಿತ್ತು... ಜೀವನ ಎಂದರೆ ನೀರ ಮೇಲಿನ ಗುಳ್ಳೆ

ಅಂತ ಮನಸು ಒಪ್ಪಿಕೊಂಡು ಬಿಟ್ಟಿತ್ತು,,
    
ನಮ್ಮ  ಪ್ರಾರ್ಥನೆ ಇಷ್ಟೇ... ಅಗಲಿದ ಆ ಅತೃಪ್ತ ಆತ್ಮಗಳಿಗೆ.... ಹೃದಯ ಪೂರ್ವಕ  ಶ್ರದಾಂಜಲಿ..










"MAY YOUR SOUL REST IN PEACE"

Tuesday, May 11, 2010

ನೆನಪಿರಲಿ ,,, ನನಗೂ.ನಿಮ್ಮೆಲ್ಲರಿಗೂ ..


ನಮ್ಮ ಜೀವನ ನಮ್ಮ ಕೈಯಲ್ಲೇ ಇದೆ,, ಅದು ರೂಪಿಸೋ  ಹಕ್ಕು ನಮಗೆ ಅಲ್ವ..

ಈ ಜೀವನ ಅನ್ನೋ ಹಾದಿಯಲ್ಲಿ ನಮಗೆಷ್ಟೋ ರೀತಿಯ ಅನುಭವಗಳು ಆಗುತ್ತವೆ..ಕೆಲವು   ಅನುಭವಗಳು     ಒಳ್ಳೆಯ   ಪಾಠವನ್ನೇ  ಕಲಿಸಿ ಕೊಡುತ್ತವೆ..

ವಿಭಿನ್ನ ರೀತಿಯ ಜನರ ಪರಿಚಯ .....ಕೆಲವರಲ್ಲಿ ಆತ್ಮೀಯತೆ ,,ಮತ್ತೆ ಕೆಲವರಲ್ಲಿ ಏನೋ ಸೆಳೆತ.. ಇನ್ನು ಕೆಲವರಲ್ಲಿ ಏನೋ ಶತ್ರುತ್ವ,,,

ನಮಗೆ ತಿಳಿದಿರೋ ಹಾಗೆ ಈ ಜನ್ಮದ  ಪರಿಚಯ ಮಾತ್ರ ನಮಗಿರೋದು.. ಹಾಗಿರುವಾಗ  ಕೆಲವರ ಪರಿಚಯ ನಮ್ಮ ಬಾಳಿನ ತಿರುವನ್ನೇ ಬದಲಿಸಿ ಬಿಡುತ್ತವೆ..

 ನಮ್ಮ ಸ್ವಭಾವ ವನ್ನ ನಾವು  ಅರ್ಥ ಮಾಡೋಕಾಗಲ್ಲ,,,  ನಮ್ಮ ನ್ಯೂನತೆಗಳು ನಮಗೆ ಗೊತ್ತಾಗೊಲ್ಲ.. 
ಬೇರೆಯವರ ಬಗ್ಗೆ ನಾವು ಎಷ್ಟು ಬೇಕಾದರು ಕಾಮೆಂಟ್ಸ್ ಕೊಡ್ತೀವಿ.. ಆದ್ರೆ ನಮ್ಮ ವೀಕ್ ನೆಸ್ಸ್  ಏನಂಥ ನಮಗೆ ಗೊತ್ತಿರಲ್ಲ ...

ನಮ್ಮ ಮನಸಿನ್ನ ಭಾವನೆಗಳನ್ನ ಹಂಚಿಕೊಳ್ಳೋಕೆ ನಮಗೆ ಹಲವಾರು ಆತ್ಮೀಯರು  ಇರಬಹುದು..ಆದರು ಎಲ್ಲವನ್ನ ಹ೦ಚಿ ಕೊಳ್ಳೋಕೆ ಆಗದೆ ಇರಬಹುದು.

ಆದರೆ ನೆನಪಿರಲಿ ನಾವು ನಮ್ಮ ಜೀವನದಲ್ಲಿ ಆತ್ಮೀಯರದವರನ್ನ ಮರೆತು ಬಿಡುವಂಥ ದೊಡ್ಡ ತಪ್ಪು  ಯಾವತ್ತು ಮಾಡಬಾರದು...  ಈ ಜನ್ಮದ ವಿಷಯವಷ್ಟೇ ನಮಗೆ ಗೊತ್ತಿರೋದು..  ಹಿ೦ದಿನ ಜನ್ಮ ..ಪುನರ್ಜನ್ಮ ,,, ಯಾವುದು ಕೂಡ ನಮಗೆ ಗೊತ್ತಿರಲ್ಲ.. .... ಆತ್ಮೀಯ ...ಮಿತ್ರರ ಬಂಧುಗಳ ಸವಿ ನೆನಪನ್ನು  ,..ಪರಿಚಯವನ್ನು... ಅವರ ಮೇಲಿನ ಭಾವನೆಗಳನ್ನು  ಸದಾ  ಹಸಿರಾಗಿಡಿ......ಭಾ0ಧವ್ಯವನ್ನ      ಮರೆತು ಬಿಡಬೇಡಿ ...ಪ್ಲೀಸ್..     ಪ್ಲೀಸ್ .,...ಪ್ಲೀಸ್...

Thursday, March 25, 2010

ಮನದಾಳದ ಹನಿ ಹನಿ


ಮನಸೊಂದು ಮರ್ಕಟ
ಅಲೆಯಬಿಟ್ಟರೆ ಅದು ಅಲೆಯುತ್ತೆ
 ದಿಕ್ಕು ತಪ್ಪಿ

ಹಿಡಿತದಲ್ಲಿದರೆ ಇದು ದಿಟ
ಹೇಳಿದಾಗೆ ಕೇಳುತ್ತೆ
ಎಲ್ಲ ಒಪ್ಪಿ

============

ಯವ್ವನದ ಹೊಳೆ
ಈಜಾಟ ಬಲು ಚೆನ್ನ
ಅಲೆಗಳ  ಹೊಡೆತ ಕ್ಕೆ
ಸಿಕ್ಕಿದರೆ ಎಲ್ಲ ಶೂನ್ಯ


===========

ಮಾನವೀಯತೆ ಇರಲಿ ಮನದಲಿ
ಪ್ರೀತಿ ತುಂಬಿರಲಿ ಹೃದಯದಲಿ
ಕಷ್ಟ ನಷ್ಟಗಳ ಸರಮಾಲೆ
ಎದುರಿಸುವೆ ಎಂಬ ಛಲ ಇರಲಿ
ಬಾಳಿನಲಿ

===============

Thursday, March 18, 2010

ಸೈಂಟ್.ಮ್ಯಾರಿಸ್....ಮಲ್ಪೆ...ಉಡುಪಿ

ಉಡುಪಿಗೆ ಬನ್ನಿ ಶ್ರೀ ಕೃಷ್ಣ ನ ಊರಿಗೆ..

ಮಲ್ಪೆಗೆ  ಉಡುಪಿಯಿಂದ   ಸುಮಾರು  ೨೦ ನಿಮಿಷ,,,,,  ಅಲ್ಲೇ ಇದೆ ನೋಡಿ ಒಂದು ಪುಟ್ಟ ದ್ವೀಪ ,,,,,,ಅದೇ ಸೈಂಟ್.ಮ್ಯಾರಿಸ್....
ಒಮ್ಮೆ ಹೋಗಿ ನೋಡಿ ..ಉಡುಪಿಗೆ ಶ್ರೀ ಕೃಷ್ಣನ ದರ್ಶನಕ್ಕೆ  ಬಂದವರು ಇಲ್ಲಿಗೆ ಬಂದು ಹೋಗಿ..

ನಾ ಹಾಕಿದ ಈ ಫೋಟೋಸ್  ನೋಡಿಯಾದ್ರೂ    ಪ್ಲೀಸ್ ಬಂದು ನೋಡಿ....
ನಿಜವಾಗಿಯೂ ನಾವು ಸಮುದ್ರದ ಮದ್ದೆ ಇದ್ದೇವೆ  ಅಂತ ಅನಿಸೋದೇ ಇಲ್ಲ.. ನಿಜವಾಗಿಯೂ   ನನಗೆ ಆ ಸಿಹಿ  ಅನುಭವವನ್ನ  , ಆನಂದವನ್ನ ಈ ಪುಟ್ಟ ಪದಗಳಲ್ಲಿ ವರ್ಣಿಸೋಕೆ ಬರಲ್ಲ.... ಈ ಫೋಟೋ ನೋಡಿಯಾದ್ರೂ ಒಮ್ಮ ಬಂದು ಹೋಗಿ ....ಪ್ಲೀಸ್ .....
  

   
ಸಮುದ್ರ್ದದ ನಡುವಿನ ಯಾನ ..ಒಹ್...   

        ಬಿಸಿಲಲ್ಲಿ ಸಾಕಾದರೆ .. ನಿಮಗಿದೋ ನೆರಳಿನ ಆಸರೆ..       




ಸಂಗಮ,,,,,,,  ದ್ವೀಪ ದ ಆ ಕಡೆ ,,, ಸಮುದ್ರದ ಈ ಕಡೆ,  ನಾನೊಂದು ತೀರ ..ನೀನೊಂದು ತೀರ


ಜಲ....ನೆಲಗಳ  .....ಸಮಾಗಮ........

Thursday, March 4, 2010

ಗೆಳತಿ ....ಓ ಗೆಳತಿ ,,,,,

   
         ನಗುವಿನ ಬೆಳದಿಂಗಳು
        ತುಂಬಿದೆ ಸುತ್ತಲು
       ಕತ್ತಲಲ್ಲಿ ಕುಳಿತುಕೊಂಡು
        ಅಳುತ್ತಿರುವೆ ಯಾಕೆ ಗೆಳತಿ

          ಹೊರಗೆ ಬಂದು ನೋಡು ಒಮ್ಮೆ
          ಎಲ್ಲ ಕಡೆ ಗಿಜಿ ಗಿಜಿ
         ಕಷ್ಟ ಸುಖದ ನಡುವೆ
         ಓಡುತ್ತಿದೆ ಬದುಕಿನ ಗಾಡಿ

        ತಲೆಯ ಮೇಲೆ ಕೈ ಬೇಡ
       ಹಳೆ ನೆನಪುಗಳು ಮರೆಯಾಗಲಿ 
        ಮತ್ತೆ ಹೊಸ ಆಸೆ ತುಂಬಿಕೊ
         ಚಿಗುರಿಸಿಕೋ ಹೃದಯ
         ಚಿಮ್ಮಲಿ ಹೊಸ ಚೇತನ

          ಬಾಳೊಂದು ಹೋರಾಟ
          ಮರೆಯದಿರು ಗೆಳತಿ
          ಬಿಡಬೇಡ ಛಲವ
          ಉತ್ಸಾಹದ ಚಿಲುಮೆಯಾಗಿ
          ನಗುತಿರು ಸದಾ...........


         
         
 

        

       
 ನೀ ಇರಲು ಜೊತೆಯಲ್ಲಿ
ಸನಿಹ ಇರಲು ಮಾತು ಬಾರದು
ದೂರವಾಗಲು ಹಾಡಿನ ಸಾಲು
ರಾಗವಾಗಿ ಹಾಡುವುದು ಮನವು
ನೆನಪು ಮಾಡಲು ಬಲು ಸೊಗಸು
ಒಂದಾಗಿ ಕಳೆದ ಕ್ಷಣಗಳು



                     ಮರೀಚಿಕೆ
ನಾ ಹೋದೆ  ಅದರ ಹಿಂದೆ  ಹಿಂದೆ
ಆದರೆ ಅದು ಓಡಿತು ಮುಂದೆ ಮುಂದೆ                                                                          
ಕೈಗೆ ಸಿಕ್ಕಿತು ಅನ್ನುವಷ್ಟರಲ್ಲಿ
ದೂರ ದೂರ ಓಡುತ್ತಿತ್ತು

                     ..ಆಕೆ  ಹೆಣ್ಣು   
 ಹೆಣ್ಣಿನ ಜನನ
 ಬಲು ಭಾರ ಜೀವನ
ಬಾಲ್ಯದ ನಲಿವಿನ  ದಿನ ಮರೆತು ಬಿಡಲು
ಓಡಿ  ಬರುವುದು ಯವ್ವನ

ಕನಸುಗಳ ಕಾಣುವುದು ಮನ
ನನಸಾಗುವುದೇ ಆ ದಿನ
ಪ್ರಿಯತಮನ ತೋಳ ಬಂಧನ
ಮಾತಿಗೊ೦ದು ಚು೦ಬನ
ನಿಜವಾಗುವುದೇ ಈ ಸ್ವಪ್ನ .....













                    

Wednesday, February 24, 2010

ಈ ಸ್ನೇಹ








ಈ ಸ್ನೇಹದ ಸ್ಪರ್ಶವಾದಾಗ
ಮೊಡ ಮುಸುಕಿದ ಬಾನು

ಗಾಳಿ ಬ೦ದಾಗ ತಾನು
ತೇಲಿ ಹೋಗುವುದು

ನೋವು ತು೦ಬಿದ ಮನವು
ಪ್ರೀತಿ ಆಸರೆ ಗಾಗಿ
ಹುದುಕುತಿರುವುದು

ಕಮಲ ಅರಳುವುದು
ಸೂರ್ಯ ಬ೦ದಾಗ
ಮೊಗವು ನಗುವುದು
ನಿನ್ನ ಕ೦ಡಾಗ

ಬೇಸರ  ನೀಗಲು
ಕುಲು ಕುಲು ನಗಲು
ಭಾವನೆ ತು೦ಬಿದ
ಪ್ರೆಮದ ಹೊನಲು

ಬೇಕೆ ಬೇಕು ಬಾಳಿಗೆ
ಸ್ನೇಹದ ಮಡಿಲು
ಮಮತೆ  ತು೦ಬಿದ
ಪ್ರೀತಿಯ ಕಡಲು
ಎಲ್ಲರಿಗೂ ಸಿಗಲಿ
 ಸ್ನೇಹದ   ಆಸರೆ  ಪ್ರೀತಿ ಬಾಳಲಿ

Tuesday, February 16, 2010

ಅದೇ ಕಣ್ಣುಗಳು











ನಿನ್ನ ಆ ನೋಟ ..
ಮತ್ತೆ ಅದೇ ನೋಟ..
ಆ ನೋಟದಲಿ ಏನೋ ಹುಡುಕಾಟ..
ದಿನಾ ಇದೆ ಕಣ್ಣ ಮುಚ್ಚಾಲೆ ಆಟ.
ಕೊಡುತ್ತಿದೆ ಮನಕೆ ಬಲು ಕಾಟ
ಕಣ್ಣು ಕಣ್ಣು ಸೇರಿದಾಗ ಆಗುವ ಆ ಪೇಚಾಟ ..

ಹೃದಯದ ಬಡಿತ ಏರು ಪೇರು
ಮನದ ಮಿಡಿತ ತುಡಿತ ಕ್ಕೆ ಕಾರಣ ಯಾರು
ಅದೇ ಕಣ್ಣುಗಳು ..

ಮಾತಿಲ್ಲ ಮೌನ ,,
ಹಾಡುತಿದೆ ಸು೦ದರ ಗಾನ
ಸಮಯ ದ ಪರಿವೆಯಿಲ್ಲ
ನೋಟದೊಳು ನೋಟ
ಕೂಡಿ ಆಡುವಾಗ ಆಟ..
ಭೂ ಕಂಪವಾದರು ಚಿಂತಿಲ್ಲ
ಕಾರಣ ಅದೇ ಕಣ್ಣು ಗಳು..

Monday, February 15, 2010

ಕನಸು ನನಸಾಗಲಿಲ್ಲ ...!






ಅದೊ೦ದು ಸು೦ದರ ಕನಸು
 ರಸಮಯ ಕಾವ್ಯ ಅ೦ದು ಕೊ೦ಡಿದ್ದೆ ...
ಕತೆ , ಕಾದ೦ಬರಿಗ ಳಲ್ಲಿ ಬರುವ ರೋಮಾಂಚನ 
ಸನ್ನಿವೇಶಗಳ ಓದಿ ಜೀವನ ಕೂಡ 
ಹೀಗೆ ಅ೦ದು ಕೊಂಡಿದ್ದೆ ..

ಜೀವಕ್ಕೆ ಜೀವ,, ಭಾವಕ್ಕೆ ಭಾವ
ಪಲ್ಲವಿಗೆ ಅನುಪಲ್ಲವಿ ಸೇರಿ
ಬಾಳೊಂದು ಸು೦ದರ ಹಾಡಾಗುತ್ತೆ
ಎ೦ದು ಕೊ೦ಡಿದ್ದೆ


ಮನಸು ಮನಸು ಗಳು ಸೇರಿ
ಕನಸು ಕನಸುಗಳು ಕೂಡಿ
ಪ್ರೀತಿಯ ತೋಟದಲಿ ನಗು ಹೂವು
ಅರಳಬಹುದು ಎಂದು ಕೊಂಡಿದ್ದೆ

ಒಲವಿನ  ತೇರಲಿ  ಏರಿ
ನಲಿವಿನ ಸಿಹಿಯನು ಉಂಡು
ಏನೇ ಕಷ್ಟ ಬ೦ದರೂ
ಒಂದಾಗಿ ಜಯಿಸಬಹುದು
ಅ೦ದು ಕೊಂಡಿದ್ದೆ ..

ಆದರೆ ಹಾಗೆ ಆಗಲೇ ಇಲ್ಲ..
ಮನಸು ಕಂಡಿದ್ದು ತಿರುಕನ ಕನಸು
ವಾಸ್ತವವೇ ಬೇರೆ... 










,


















Tuesday, February 9, 2010

ನನ್ನ ಪ್ರೀತಿಯ ಬಾಲ್ಯವೇ.. ಮತ್ತೊಮ್ಮೆ ಮರಳಿ ಬಾ









ಆ ದಿನಗಳು ..ಅದೇ ಬಾಲ್ಯದ ದಿನಗಳು..ಎಷ್ಟು ಚೆನ್ನಾಗಿತ್ತು. ಮಾತ್ರ ಅದು ಈಗ ನವಿ ನೆನಪು ಮಾತ್ರ...
ಆಗ ಮನಸ್ಸು ಕೂಡ ಎಷ್ಟು ಮುಗ್ಧವಾಗಿರುತ್ತೆ  ಅಲ್ವ...ಏನು ಗೊತ್ತೇ ಇರುವುದಿಲ್ಲ..
ಕಷ್ಟ ನೋ  ಸುಖ ನೋ , ಪ್ರೀತಿ ಅಥವಾ ದ್ವೇಷ  ..ಇದರ  ಅರ್ಥವೇ ಗೊತ್ತಿರದಷ್ಟು ಮುದ್ದಾಗಿತ್ತು ಆ ಬಾಲ್ಯ...
ಸಿಟ್ಟು ಬಂದರೆ ಕೋಪ ಹಾಕುವುಧು ಒಂದೇ ಗೊತ್ತಿದ್ದದ್ದು..

ಮನೆಯಲ್ಲಿ  ಆಡುತಿದ್ದ ಆ ಕಣ್ಣು ಮುಚ್ಚಾಲೆ ಆಟ, ಜೂಟಾಟ ಏನು ಚಂದ ಇತ್ತು...ಬೇಸಿಗೆ ರಜಾ ದಿನದಲ್ಲಿ ಮಾವಿನ ಮರದ ಹಣ್ಣು ಹೆಕ್ಕಲು  ಪೈಪೋಟಿ .ಗೆಳೆಯ ,ಗೆಳತಿಯರ ಜೊತೆಗಿನ ಆ ದಿನ ...ಮತ್ತೆ ಮತ್ತೆ ನೆನಪು ಬರುತಿದೆ...

ನನಗೆ ಇನ್ನು ನೆನಪಿದೆ ಆ ಹಾಸ್ಯ ಪ್ರಸಂಗ...
ಶಾಲೆಗೆ ಹೋಗುವಾಗ ಬರುವಾಗ ನಮ್ಮದೇ  ಒಂದು ದೊಡ್ಡ ಗುಂಪು....ಒಟ್ಟು ಎಂಟು ಜನ ಹುಡುಗಿಯರು ಆರು ಜನ ಹುಡುಗರು.. ಮನೆಯಿಂದ ಸುಮಾರು ಮುಕ್ಕಾಲು ಗಂಟೆ  ದಾರಿ ಶಾಲೆಗೆ... ಹೋಗುವಾಗ ಸಾಕಿತ್ತು ...
ಆದರೆ ದಾರಿಯ ಮಧ್ಯೆ  ಒಂದು ದೊಡ್ಡ ಗದ್ದೆ ..ಅದೂ ಕಬ್ಬಿನ  ಗದ್ದೆ... ಗದ್ದೆಯಲ್ಲಿ ಹೋಗಲಿಕ್ಕೆ  ಇಲ್ಲ ಗದ್ದೆ ನಡುವೆ ಒಂದು  ದಾರಿ ಮಾಡಿದ್ರು.. ಅದರಲ್ಲಿ ನಮ್ಮ ದಿನ ನಿತ್ಯದ ಪಯಣ ..
ಹೀಗಿರಬೇಕಾದ್ರೆ ಗದ್ದೆಯಲ್ಲಿನ ಕಬ್ಬು  ಬೆಳೀತಾ ಬಂತು..ನಮಗೆಲ್ಲ ಅದರ ಮೇಲೆ ಕಣ್ಣು .. ಆ ಕಬ್ಬಿನ  ಒಡೆಯರ ಮನೆ ಗದ್ದೆಗಿ೦ತ ಸ್ವಲ್ಪ   ದೂರ ಇತ್ತು..ನಮೆಗೆಲ್ಲ ಆ ಕಬ್ಬಿನ ಮೇಲೆ ಕಣ್ಣು,,  ನಮ್ಮೆ ಗೆಳೆಯರು ಓ೦ದು  ದಿನ ಗಟ್ಟಿ ಮನಸು ಮಾಡಿಯೇ ಬಿಟ್ಟರು..ಶಾಲೆ ಬಿಟ್ಟು ಹಿ೦ದೆ ಬರುವಾಗ ಮೆಲ್ಲನೆ ಆ ಗದ್ದೆಯ ಒಳಗೆ ತೂರಿಕೊಂಡು  ಕಬ್ಬನ್ನು ಮೆಲ್ಲಗೆ ತು೦ಡು ಮಾಡಿ ತರಲು ಶುರು ಮಾಡಿದರು ..ದಿನಾ ಇದೇ ತರ  ಮುಂದುವರಿಯುತ್ತಿತ್ತು..ಕಬ್ಬನ್ನು ತಿ೦ದು ರಸವನ್ನ ಹೀರಿ ..ದಾರಿ ಸವೆಸುವ ಆ ಪರಿ ಗಮ್ಮತ್ತೆ ಗಮ್ಮತ್ತು..

ಆದರೆ ಒಂದು ದಿನ ಮಾತ್ರ ಆ ಗದ್ದೆಯ ಒಡೆಯರ ಕೈಯಲ್ಲಿ ಸಿಕ್ಕಿ ಬೀಳುವ ಪಜೀತಿ ನಮ್ಮ ಗೆಳೆಯರದಾಯಿತು...ಗದ್ದೆಯ ನಡು ಭಾಗ ಖಾಲಿ ಖಾಲಿ ಯಾದಾಗ ಅವರಿಗೆ ಹೇಗೆ ಅನಿಸಿರಬಹುದು...ಅಯ್ಯೋ ಪಾಪ..ನಾವು ಬರುವ ಹೊತ್ತಲ್ಲಿ ಕಾದು ಕೂತಿದ್ದರು ಅನಿಸುತ್ತೆ,,,ನಮಗೆ ನಮ್ಮ ಗೆಳೆಯರಿಗೆ ಅದರ ಪರಿವೆ ಇರಲಿಲ್ಲ..ಅವರು ದಿನ ನಿತ್ಯದಂತೆ  ಗದ್ದೆಯ ಒಳಗೆ ತೋರಿ ಕಬ್ಬು ತು೦ಡು ಮಾಡಲು ಸುರು ಮಾಡುತ್ತಿದ್ದಂತೆ ಈ ಕಡೆಯಿ೦ದ ಬೆನ್ನಿಗೆ ಬೀಳಲು ಸುರುವಾಗಿತ್ತು..ನಾವೆಲ್ಲ ಹೆದರಿ ಚೆಲ್ಲಾಪಿಲ್ಲಿ.. ಕಬ್ಬಿನ ರುಚಿಯೊ೦ದಿಗೆ ಪೆಟ್ಟಿನ ರುಚಿಯು ಸೇರಿ ಒಳ್ಳೆಯ ಕಬ್ಬಿನ ಪಾನಕ ಕುಡಿದ ಹಾಗಿತ್ತು..ಮತ್ತೆ  ಒಂದು ವಾರ ನಮ ದಾರಿಯೇ ಬದಲಾಯಿತು... ಆದರೂ ಆ ನೆನಪು ಮಾತ್ರ ಕಬ್ಬಿನ ರಸದಂತೆ ಇನು ಸಿಹಿಯಾಗಿಯೇ ಉಳಿದಿದೆ..
                      ಇನ್ನೊ೦ದು ಕ್ಲಾಸಿನಲ್ಲಿ ನಡೆದ ಹಾಸ್ಯ ಪ್ರಸ೦ಗ.  ಎಂಟನೆ ಕ್ಲಾಸಿನಲ್ಲಿ ಇರಬೇಕಾದ್ರೆ ..ಬೆಳಗ್ಗಿನ ನಾಲ್ಕನೇ ಪೀರಿಯಡ್ ಫ್ರೀ ಇತ್ತು.   ನಾವು ನಾಕು ಜನ ಗೆಳತಿಯರು ಊಟ ಮುಗಿಸಿ ಏನು ಮಾಡುವುದು  ಎ೦ದು ಯೋಚಿಸುತ್ತಿರಬೇಕಾದರೆ ಒಬ್ಬಳು ಹಾಡು ಹೇಳೋಣಾ ಎ೦ದ ಳು . ಕ್ಲಾಸಿನಲ್ಲಿ ನಮ್ಮನ್ನು ಬಿಟ್ಟರೆ ಉಳಿದವರೆಲರು ಲೈಬ್ರರಿ ಗೆ  , ಅಲ್ಲ್ಲಿಗೆ  ಇಲ್ಲಿಗೆ ಅಂತ ಹೊರಗೆ ಹೋಗಿದ್ದರು.. ಸುರುವಾಯಿತು ನಮ್ಮ ಹಾಡಿನ ಸರಮಾಲೆ..
ಆ ಕಡೆಯಿಂದ ಈ     ಕಡೆಯಿಂದ ಬೇರೆ ಕ್ಲಾಸ್ ನಡೆಯೋ ದನ್ನ ಮರೆತು ನಮ್ಮ ಸ್ವರ ಜೋರಾಗಿ ತಾರಕಕ್ಕೆ ಏರಿತ್ತು,, 

ಆಛೆ ಕ್ಲಾಸಿನ ಸರ್ ಕೈಯಲಿ ಬೆತ್ತ ಹಿಡಿಧು ನಮ್ಮ ಕ್ಲಾಸಿಗೆ ಬ೦ದಾಗಲೆ ನಮ್ಮ ಸ್ವಾ ಅಲ್ಲೇ ಗುಂ.   ನನ್ನ ಸವರಣೆ ಜಾಸ್ತಿ ಪಿಚ್ನಲ್ಲಿ ಇತ್ತು ..ಅದನ್ನೇ ನೆಪ ಮಾಡಿಕೊಂಡು ನನ್ನನ್ನ ಮಾತ್ರ ಅವರ ಕ್ಲಾಸಿಗೆ ಕರೆದು ಕೊ೦ಡು ಹೋಗಿ ಒಂದು ಹಾಡು ಹಾಡಲಿಕ್ಕೆ ಹೇಳಿದ್ರು... ನಾ ಎಷ್ಟು ಒಲ್ಲೆನೆ೦ದರೂ  ಬಿಡದೆ ಬೆತ್ತ ತೋರಿಸಿ ಮತ್ತೆ ಮತ್ತೆ ಒತ್ತಾಯ ಮಾಡಿ ಹಾಡಿಸಿಯೇ ಬಿಟ್ಟರು..  ನನಗೆ ಮಾತ್ರ ಆ ಹಾಡು , ಆ ಪ್ರಸ೦ಗ ಇನ್ನು ಹಾಗೆ ಹಸಿರಾಗಿ ಮನದಲ್ಲಿಯೇ ಉಳಿದು ಬಿಟ್ಟಿದೆ.........ನನ್ನ ಹೆಸರನ್ನು ಯಸ್..ಜಾನಕಿ ಅ೦ತ ನಾಮಕರಣ ಮಾಡಿಬಿಟ್ರು..ಇಂದಿಗೂ ಆ ಸರ್  ಎಲ್ಲಾದರು ಸಿಕ್ಕಿದೆ ನನ್ನ ಕರೆಯೋದು ಅದೇ ಹೆಸರಿ೦ದ..



ಇನ್ನು ಎಷ್ಟೋ  ಪ್ರಸ೦ಗ ಗಳು  ಇವೆ ಮರೆಯಲಾಗದು.... ಹೇಳಲಾಗದ್ದು .

ಆ ಬಾಲ್ಯದ ಸಿಹಿ ನೆನಪು ಮತ್ತೆ ಮತ್ತೆ ಬರುತ್ತಾ ಮುದುಡಿದ ಈ ಮನವನ್ನ  ಅರಳಿಸುತ್ತಲೇ ಇರುತ್ತದೆ............ಓ ಬಾಲ್ಯವೇ ಮತ್ತೊಮ್ಮೆ ಬಾ ಮರಳಿ...           ಕಾದಿರುವೆ ನಿನಗಾಗಿ ................

Thursday, February 4, 2010

ಸವಿ ನೆನಪು



ನಿನ್ನ  ನೆನಪಾದರೆ
 ಸಾಕು
ಮನ ಮೂಕವಾಗುವುಧು
ಕಣ್ಣು  ತುಂಬಿ ಬರುವುಧು
ಹೃದಯ ಭಾರವಾಗುವುಧು

             ನೀನೇಕೆ ನನ್ನಿಂದ ದೂರವಾದೆ
             ನೀನೇಕೆ ನನ್ನಿಂದ ಮರೆಯಾದೆ
             ನೀನೇಕೆ ನನ್ನಿಂದ ಬೇರೆಯಾದೆ

ಜೊತೆಯಾಗಿ ಬೆರೆಯುತಿದ್ದ
ಆ ದಿನಗಳು
ಒಂದಾಗಿ ಪ್ರೇಮ ಗೀತೆ ಹಾಡುತಿದ್ದ
ಆ ಕ್ಷಣಗಳು
ಹಕ್ಕಿಯಾಗಿ ಹಾರುತಿದ್ದ
ಆ ಜೋಡಿ  ರೆಕ್ಕೆಗಳು


          ಎಲ್ಲವೂ ಸೇರಿ
        ಈಗ ಕಹಿಯಾಗಿ
        ನನ್ನ ಸುತ್ತ ಮುತ್ತ  ಸುತ್ತಿ
        ನನ್ನನ್ನ ಬೆನ್ನು ಹತ್ತಿ
         ಕೊಲ್ಲುತ್ತಿವೆ  ..

ಹೃದಯ ದೊಳಗಿನ ಪಿಸು ಮಾತು .




ನನ್ನವರಿಗಾಗಿ ನನ್ನಿಂದ ಈ ಕರೆಯೋಲೆ ..
ಓ ನನ್ನ ಪ್ರೀತಿಯ ಹುಡುಗ
ನಿನಗೆ ಎಲ್ಲಿ ಕೇಳಿಸುತ್ತೆ ಅದು

ಭಾವನೆಗಳು ತುಂಬಿ ಬಂದು
ಹೃದಯ ದೊಳಗೆ ಭಾರವಾಗಿ
ಹೊರಗೆ ಬರಲು ಒದ್ದಾಡಿ
ಪಿಸು ಮಾತನ್ನು ಆಡುತ್ತವೆ
ಕೇಳುತ್ತಿದೆಯ 

ನಿನಗೆಲ್ಲಿಯಾ ಸಮಯ
ನಿನಗೆಲ್ಲಿದೆ ತಾಳ್ಮೆ
ಪಿಸು ಮಾತು ಬಿಡು
ನನ್ನ ದಾದ ಗಟ್ಟಿ ಸ್ವರಕ್ಕು
ನಿನ್ನ ಕಿವಿ ಕಿವುಡೆ ಸರಿ

ಕಾಡಿ ಕೊಂಡೆ  ದಿನ ದಿನ
ಬೇಡಿಕೊಂಡೆ ಆ ದಿನ
ಕಲ್ಲಾದ ಮನಸು ನಿನ್ನದು
ತೂತು ಮಾಡಿದರು ಕೇಳದು

ಈಗ ಈ ಹೃದಯ
ಪಿಸು ಮಾತು ಅಡುವುದನ್ನೆ ಮರೆತಿದೆ
ಮೌನವಾಗಿ  ಕುಳಿತಿದೆ
ಮೋಕವಾಗಿ ಹೋಗಿದೆ.





















Monday, February 1, 2010

ಬಸ್ ಬ೦ತು ಬಸ್








ಬಸ್ ಬ೦ತು ಬಸ್

ಈ ಬಸ್ಸಿನಲ್ಲಿ   ಅದೂ ರಶ್ ನಲ್ಲಿ

ನಿಂತವರು ಸರ್ಕಸ್ ಮಾಡ್ತಾರೆ

ಡ್ರೈವರ್ ಬ್ರೇಕ್ ಹಾಕಿದಾಗ

ಹಿಂದೆ ಮುಂದೇ ಓಡುತ್ತಾರೆ

                     ಆದ್ರೆ ಕೆಲವರು ಕುಳಿತಲ್ಲಿಯೇ
                                   
                         ಹತ್ತಿರದವರನ್ನು ಆಡಿಸ್ತಾರೆ
               
                                 ಕಾಡಿಸ್ತಾರೆ  ಪೀಡಿಸ್ತಾರೆ



ಕೆಲವರಿಗೆ ಅನುಭವ ಹೊಸತು
                     ಹಲವರಿಗೆ ಬಿಸಿ ತುಪ್ಪ
ಎದುರಿಸಲು ಸಂಕೋಚ
                                    ಬೆದರಿಸಲು ಭಯ

ಒಮ್ಮೊಮ್ಮೆ ಒಂದು ಥರ




ಯಾಕೋ ಏನೋ ಗೊತ್ತಿಲ್ಲ ..ಒಮ್ಮೊಮ್ಮೆ ಜಗತ್ತಿನ ಎಲ್ಲ ಸಂತಸ ..ನಗು ..ಉಲ್ಲಾಸ ಎಲ್ಲ ನನ್ನಲ್ಲಿಯೇ ಇದೆ ಅನಿಸುತ್ತೆ...

ಆದರೆ ಮತ್ತೊಮ್ಮೆ ಎಲ್ಲ ಖಾಲಿ ಖಾಲಿ ...ಶೂನ್ಯವಾಗಿ ಬಿಡುತ್ತೆ,,
ನಾನು ಯಾಕೆ ಹೀಗಾದೆ .ನನಗೆ ಗೊತ್ತಿಲ್ಲ ..ಅಲ್ಲ ನಾನು ಹೀಗೆ ಇರಲ್ಲಿಲ್ಲ..ಆದರು ಯಾಕೆ ಹೀಗಾದೆ ?



ಮೊದಲು ನಾನು ಹೇಳಿದ್ದೆಲ್ಲ ನನಗೆ ಸಿಗಬೇಕು.ಹಾಗಿದ್ದೆ .. ಆದರೆ ಈಗ .... ಮನದಲ್ಲಿನ ಭಾವನೆಗಳನ್ನು ವ್ಯಕ್ತ ಪಡಿಸಲು ಸ್ವಾತಂತ್ರ ಇಲ್ಲದಷ್ಟು ಸ್ಥಿತಿಗೆ ಬಂದಿದ್ದೇನೆ ಅ೦ದ್ರೆ ಇದು ಯಾರ ತಪ್ಪು...


ಈಗಲೂ ಮೆಲುಕು ಹಾಕುತ್ತೇನೆ ಆ ದಿನಗಳನ್ನ .. ಹಕ್ಕಿಯಂತೆ ಹಾರುತಿದ್ದ ಆ ಕ್ಷಣಗಳನ್ನ .....ಆದರೆ ಈಗ ಈ ಬಂಧನ ..


ಕಷ್ಟ ಅ೦ದರೆ ಏನು ಅಂತ ಗೊತ್ತಿಲ್ಲ.. ಬೇಸರ ಅನ್ನೋದು ಇಲ್ಲವೇ ಇಲ್ಲ... ಸದಾ ಖುಷಿಯಾಗಿ , ನಗು ನಗುತ್ತ ಇದ್ದ ಆ ದಿನಗಳು ಮತ್ತೆ ಖಂಡಿತ ಬರುವುದಿಲ್ಲ ಎಂಬ ಸತ್ಯ ಗೊತ್ತಿದ್ದರೂ ಅದನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಂಡು ಕುಶಿ ಪಡುವ ಸಿಹಿ ನೆನಪು ಎಷ್ಟು ಚಂದ ಅಲ್ವ...ಆ ನೆನಪೇ ತಂಪಾದ ಗಾಳಿಯಾಗಿ ...ಇಂಪಾದ ಹಾಡಾಗಿ ...ನನ್ನ ಮನದಲ್ಲಿ ಆಗಾಗ ಮೂಡಿ ಮರೆಯಾಗಿ ನೋವನ್ನ ಒಮ್ಮೊಮ್ಮೆ


ಇನ್ನೊಮ್ಮೆ ನಲಿವನ್ನ ಮನಸಿನ್ನ ಜೊತೆ ಆಡಿ ಆಡಿ ಓಡಿ ಹೋಗುತ್ತೆ .........


ಯಾವಾಗಲು ಎನಿಸೋದು ..ಇನ್ನು ಗಟ್ಟಿ ಮನಸು ಮಾಡ್ಕೊಂಡು ಇರ್ಬೇಕು  ಅಂತ ,,,ಆದ್ರೆ ಸಣ್ಣ ಪುಟ್ಟ ವಿಷಯಕ್ಕೆಲ್ಲ ಮತ್ತೆ ನೊಂದು ಕೊಳ್ಳೋದು ..ಇದೆ ಆಯಿತು,,

ಈ ಮನಸು ತುಂಬಾನೆ ವೀಕ್ ಕಣ್ರೀ...ಏನು ದಮ್ಮೆ ಇಲ್ಲ..

ಕೆಲವರು ಎಷ್ಟು ಕಡಕ್ ಇರ್ತಾರಲ್ವ..   ನಿಜವಾಗಿಯೂ ಅವರು ಗ್ರೇಟ್ ,,,,,

ನಾನು ಮಾತ್ರ ಎಷ್ಟು ಪ್ರಯತ್ನ ಪಟ್ರೂ ಯಾಕೆ ಆಗಲ್ಲ ..

ಈ ಪ್ರಪ೦ಚದಲ್ಲಿ  ಮೆ೦ಟಲಿ ಸ್ತ್ರಾ೦ಗ್ ಆಗಿ ಇದ್ರೆ ಮಾತ್ರ ನಾವು ಇರೋಕಾಗೋದು.. ಈ ಸೆ೦ಟಿಮೆ೦ಟಲ್ ಮನಸನ್ನ ಇಟ್ಕೊ೦ಡ್ರೆ ಕಷ್ಟ ಬಾರಿ ಕಷ್ಟ ..

ಬೇಸರ ಆದಾಗ ಅತೀಯಾಗಿ  ಬೇಸರ ಪಡೋದು ,  ಕುಶಿಯಾದಾಗ ತುಂಬಾ ಕುಶೀ ಪಡೋದು , ಕಷ್ಟ ಬಂದಾಗ  ಆಕಾಶನೆ ತಲೆ ಮೇಲೆ ಬಿದ್ದ ಹಾಗೆ ಮಾಡೋದು...ಎಲ್ಲ ಬಿಟ್ಟು ಬಿಡಬೇಕು..  ಕಷ್ಟ ಮನುಷ್ಯನಿಗೆ ಬರದೆ ಮತ್ತೆ ಮರಕ್ಕ ಬರೋದು..

ಸಮರಸವೇ ಜೀವನ..........ಕಷ್ಟ ಸುಖ ಎರಡನ್ನು  ಸಮವಾಗಿ ಹ೦ಚಿಕೊ೦ಡು ಬದುಕನ್ನ ಹಸನಾಗಿಸುವ ಪ್ರಯತ್ನ ನನ್ನದು .ಮನಸ್ಸು
ಹಸಿರಾಗಿರಬೇಕು.. ಆಗಲೇ ನಾವು ಕುಶಿಯಾಗಿರೋಲೆ ಸಾದ್ಯ,,,

ನಿಮ್ಮ ಅನಿಸಿಕೆ ಏನು ಹೇಳ್ತೀರಾ ,,,,,,ಪ್ಲೀಸ್ ...